ಟೈಫಾಯಿಡ್ ಎಂದರೇನು ?

ಟೈಫಾಯಿಡ್ ಎಂದರೇನು ?
ಸಾಂಕ್ರಾಮಿಕ ರೋಗವಾದ ಟೈಫಾಯಿಡ್ಗೆ ವಿಷಮಶೀತಜ್ವರ ಎಂದೂ ಕರೆಯುತ್ತಾರೆ. ವೈದ್ಯಶಾಸದಲ್ಲಿ ಸಲ್ಮೊನೆಲ್ಲ ಟೈಫ ಎಂದು ಕರೆಯಲ್ಪಡುವ ರೋಗಾಣುವೇ ಇದಕ್ಕೆ ಕಾರಣ. ಆಹಾರ ಅಥವಾ ನೀರಿನ ಮೂಲಕ ಈ ರೋಗಾಣುಗಳು ರಕ್ತದಲ್ಲಿ ಸೇರುತ್ತವೆ. ಜ್ವರ,  ಕೆಮ್ಮು, ತಲೆನೋವು ಮತ್ತು ಬಿಳಿ ರಕ್ತಕಣಗಳ ಸಂಖ್ಯೆ ಕಡಿಮೆಯಾಗುವುದು - ಇವು ಈ ರೋಗದ ಲಕ್ಷಣಗಳು. ಹಸಿವು ಕೂಡ ಕಡಿಮೆಯಾಗುತ್ತದೆ. ಜ್ವರ 40 ಡಿಗ್ರಿಯವರೆಗೂ ಏರಬಹುದು. ಸುಮಾರು 30 ದಿನಗಳಲ್ಲಿ ದೇಹದ ಉಷ್ಣಾಂಶ ಸಾಮಾನ್ಯ ಸ್ಥಿತಿಗೆ ಬರುತ್ತದೆ. ಮಲಿನಗೊಂಡ ನೀರು ಅಥವಾ ಹಾಲಿನಿಂದ ಟೈಫಾಯಿಡ್  ಹರಡುತ್ತದೆ. ಹಸಿ ಆಹಾರವೂ ಟೈಫಾಯಿಡ್  ರೋಗಾಣುಗಳಿಂದ ದೂಷಿತವಾಗಬಹುದು. ನೊಣಗಳೂ ಈ ರೋಗಾಣುಗಳನ್ನು ಒಯ್ಯಬಹುದು. ಹಿಂದಿನ ಕಾಲದಲ್ಲಿ ರೋಗ ಲಕ್ಷಣಗಳನ್ನು ಗಮನಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. 1948ರ ನಂತರ ಈ ರೋಗಕ್ಕಾಗಿ ನಿರ್ದಿಷ್ಟ ಆ್ಯಂಟಿ ಬಯಾಟಿಕ್ ಕಂಡುಹಿಡಿಯಲಾಯಿತು. ಈ ಹಿಂದೆ ಟೈಫಾಯಿಡ್ ನಿಂದ ಪ್ರತಿವರ್ಷ ಸಾವಿರಾರು ಜನ ಸಾಯುತ್ತಿದ್ದರು. ವೈದ್ಯಕೀಯ ಕ್ಷೇತ್ರದಲ್ಲಿನ ಸಂಶೋಧನೆ ಮತ್ತು ಪ್ರಗತಿಯಿಂದಾಗಿ ಈ ರೋಗವನ್ನು ಬಹುಮಟ್ಟಿಗೆ ನಿಯಂತ್ರಿಸಲಾಗಿದೆ. ಈ ರೋಗ ನಿವಾರಣೆಗೆ ನೈರ್ಮಲ್ಯ ಬಹಳ ಮುಖ್ಯವಾಗಿದೆ.

Read More

ಕೆಲಸ ಬೇಕೇ ಕೆಲಸ?

ಕೆಲಸ ಬೇಕೇ ಕೆಲಸ?
ಕೆಲಸ ಹುಡುಕುತ್ತಿದ್ದೀರಿ. ಆದರೆ ನಿಮ್ಮ ಅರ್ಹತೆಗೆ ತಕ್ಕ ಕೆಲಸ ಸಿಗುತ್ತಿಲ್ಲ. ಸಿಕ್ಕರೂ ಸಂಬಳ ಕಮ್ಮಿ. ಅಥವಾ ಕೆಲಸ, ಸಂಬಳ ಸಿಕ್ಕರೂ ಆ ಕಂಪನಿ ಕಳಿಸುವಷ್ಟು ದೂರ ಹೋಗಲು ನಿಮಗೆ ಇಷ್ಟವಿಲ್ಲ. ನಿಮಗೂ ಇಂಥ ಸಮಸ್ಯೆಗಳು ಕಾಡುತ್ತಿವೆಯೇ? ಹಾಗಿದ್ದರೆ `ಗ್ಲಾಸ್ ಡೋರ್ ಡಾಟ್ ಕಾಂ' ವೆಬ್‍ಸೈಟಿಗೆ ಬನ್ನಿ. ಇಲ್ಲಿ ವೃತ್ತಿ, ಕಂಪನಿಗಳು, ಸಂಬಳ, ಸಂದರ್ಶನ ಎಂಬ ನಾಲ್ಕು ಮುಖ್ಯ ವಿಭಾಗಗಳಿವೆ. ನೀವು ಅರ್ಜಿ ಹಾಕುವ ಕಂಪನಿಯ ಕುರಿತ ಮಾಹಿತಿಗಳು, ಸಂದರ್ಶನದಲ್ಲಿ ಕೇಳಬಹುದಾದ ಪ್ರಶ್ನೆಗಳು, ಸಂಬಳದ ಅಂದಾಜು ಮೊತ್ತ, ಎಲ್ಲಿ ನಿಮಗೆ ಬೇಕಾದ ಕೆಲಸ ಇದೆ - ಹೀಗೆ ಹಲವು ಕುತೂಹಲಕಾರಿ ಮಾಹಿತಿಗಳಿವೆ. ಇಲ್ಲಿಗೆ ಬರಬೇಕೆ? ಲಿಂಕ್ http://www.glassdoor.com/index.htm
Read More

ಫೋನ್ ಬೆಲೆಗೆ ಟ್ಯಾಬ್ಲೆಟ್

ಫೋನ್ ಬೆಲೆಗೆ ಟ್ಯಾಬ್ಲೆಟ್
ಕಳೆದೆರಡು ವರ್ಷ ಜಾಗತಿಕ ಮಾರುಕಟ್ಟೆಯಲ್ಲಿ ಟ್ಯಾಬ್ಲೆಟ್‍ಗಳು ಕಾಲಿಟ್ಟಾಗ ಸಾಮಾನ್ಯನ ಕೈಗೂ ಎಟುಕಬಹುದೆಂಬ ಸುಳಿವಿರಲಿಲ್ಲ. ಆದರೆ ತಂತ್ರe್ಞÁನದ ಸ್ಪರ್ಧೆ ಸಾಮಾನ್ಯ ಮೊಬೈಲ್ ದರಕ್ಕೆ ಟ್ಯಾಬ್ಲೆಟ್‍ಗಳು ಲಭ್ಯವಾಗುವಂತೆ ಮಾಡಿತು. ಕೇಂದ್ರ ಸರ್ಕಾರ ಶೈಕ್ಷಣಿಕ ಪ್ರಗತಿಯ ಹಿನ್ನೆಲೆಯಲ್ಲಿ ಖಾಸಗಿ ಕಂಪೆನಿಯೊಂದಿಗೆ  ಒಪ್ಪಂದ ಮಾಡಿಕೊಂಡು ಆಕಾಶ್ ಹೆಸರಿನ ಟ್ಯಾಬ್ಲೆಟ್‍ನ್ನು 1500 ರೂ. ಗೆ ಪರಿಚಯಿಸಿತು. ಇದು ಯಶಸ್ಸು ಕಾಣದಿದ್ದರೂ ಅಗ್ಗದ ಬೆಲೆಯಲ್ಲಿ ಟ್ಯಾಬ್ಲೆಟ್ ಕೊಡಬಹುದಾದ ಸಾಧ್ಯತೆ ಟ್ಯಾಬ್ ಮಾರುಕಟ್ಟೆಗೆ ಹೊಸ ತಿರುವನ್ನೇ ನೀಡಿತು. ಬಿಎಸ್‍ಎನ್‍ಎಲ್ ಮತ್ತು ಪ್ಯಾಂಟಲ್ ಕಂಪೆನಿ ಸೇರಿ 3500 ರೂ.ಗಳಿಂದ 10ಸಾವಿರದ ವರೆಗೆ ವಿವಿಧ ಶ್ರೇಣಿಯ ಟ್ಯಾಬ್ಲೆಟ್ ಗಳನ್ನು ಪರಿಚಯಿಸಿದವು. ಇದರ ಬೆನ್ನಲ್ಲೇ ಮೈಕ್ರೋಮ್ಯಾಕ್ಸ್, ಲಾವಾ, ಕಾರ್ಬನ್ ಕಂಪೆನಿಗಳು 10ಸಾವಿರದೊಳಗೇ ಟ್ಯಾಬ್ಲೆಟ್ ಸಿಗುವಂತೆ ಮಾಡಿದವು.
Read More

ಸ್ಕಾಲರ್‍ಶಿಪ್‍ಗಳ ಮಾಹಿತಿಗೊಂದು ತಾಣ

ಸ್ಕಾಲರ್‍ಶಿಪ್‍ಗಳ ಮಾಹಿತಿಗೊಂದು ತಾಣ
ತುಂಬ ಜನ ಬುದಿಟಛಿವಂತ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದಿರುತ್ತಾರೆ. ಎಷ್ಟೋ
ಬಾರಿ ಆರ್ಥಿಕ ಪರಿಸ್ಥಿತಿಯಿಂದಾಗಿಯೇ ವಿದ್ಯಾಭ್ಯಾಸ ಮೊಟಕುಗೊಳಿಸಿದವರಿದ್ದಾರೆ.
ಸಂಶೋಧಕರೂ ಅಷ್ಟೇ. ಎಲ್ಲ ಸಂಶೋಧಕರಿಗೂ ತಮ್ಮ ಸಂಶೋಧನೆಗೆ ಬೇಕಾದಷ್ಟು ಹಣ
ಸಿಗುವುದಿಲ್ಲ. ಆಗ ಸಂಶೋಧನೆಯ ಕನಸೂ ಕಮರುತ್ತದೆ. ಹೀಗಾಗಿ ಅನೇಕ ಜನ ಸ್ಕಾಲರ್
ಶಿಪ್‍ಗಳು, ಫೆಲೋಶಿಪ್‍ಗಳಿಗೆ ಅರ್ಜಿ ಹಾಕುತ್ತಾರೆ. ಅಂಥವರಿಗಾಗಿಯೇ `ಸ್ಕಾಲರ್‍ಶಿಪ್ಸ್
ಇನ್ ಇಂಡಿಯಾ ಡಾಟ್ ಕಾಂ' ಎಂಬ ವೆಬ್‍ಸೈಟ್ ಇದೆ. ಇಲ್ಲಿ ಬೇರೆ ಬೇರೆ ವಿಷಯಗಳಿಗೆ
ಸಂಬಂಧಿಸಿದ ಸ್ಕಾಲರ್‍ಶಿಪ್‍ಗಳು, ಫೆಲೋಶಿಪ್‍ಗಳು, ಸ್ಪರ್ಧೆಗಳು, ಉದ್ಯೋಗಾವಕಾಶ
ಇತ್ಯಾದಿ ವಿವರಗಳಿವೆ. ಆಸಕ್ತರು ಈ ವೆಬ್‍ಸೈಟ್‍ಗೆ ವಿಸಿಟ್ ಕೊಡಬಹುದು. ಲಿಂಕ್: http://www.scholarshipsinindia.com/
Read More

ಮನೆ ಮದ್ದು

ಮನೆ ಮದ್ದು
ಕೊತ್ತಂಬರಿ ಸೊಪ್ಪನ್ನು ನೀರಿನಲ್ಲಿ ಹಾಕಿ ಕುದಿಸಿ, ಆ ನೀರನ್ನು ಕುಡಿಯುವುದರಿಂದ ಕಿಡ್ನಿಯಲ್ಲಿ ಕಲ್ಲು ಉಂಟಾಗುವುದನ್ನು ತಡೆಯಬಹುದು.




ಅನೀಮಿಯಾದಿಂದ
ಬಳಲುತ್ತಿರುವವರು
ಪ್ರತಿದಿನ ಬೆಳಗ್ಗೆ
ಒಂದು ಲೋಟ
ಬೀಟ್‍ರೂಟ್ ಜ್ಯೂಸ್
ಸೇವಿಸಬೇಕು.



                                                                       
ಹಲ್ಲುನೋವಿದ್ದರೆ
ಒಂದು ತುಣುಕು
ಹಸಿಶುಂಠಿಯನ್ನು ಜಗಿದು
ಒತ್ತಿ ಹಿಡಿದರೆ ನೋವು
ಕಡಿಮೆಯಾಗುತ್ತದೆ.




ಊಟದಲ್ಲಿ ನಿಯಮಿತವಾಗಿ
ಹಸಿಮೂಲಂಗಿಯನ್ನು ಸೇವಿಸುವುದರಿಂದ
ಕಣ್ಣು, ಮೂಗು, ಕಿವಿ ಮತ್ತು ಗಂಟಲಿನ

ಸಮಸ್ಯೆಗಳು ನಿವಾರಣೆಯಾಗುತ್ತವೆ.


Read More

ನೀವು ಟೆನ್ನಿಸ್ ಪ್ರಿಯರೇ...?

ನೀವು ಟೆನ್ನಿಸ್ ಪ್ರಿಯರೇ...?
ನೀವು ಟೆನ್ನಿಸ್ ಬಗ್ಗೆ ಆಸಕ್ತಿ ಇರುವವರಾದರೆ ಈ ಆಟಗಳನ್ನು ಮಿಸ್ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ಅನಿವಾರ್ಯ ಸಂದರ್ಭಗಳಲ್ಲಿ ನೋಡಲಿಕ್ಕೆ ಆಗದಿರಬಹುದು. ಅಂಥ ಹೊತ್ತಲ್ಲಿ ನಿಮಗೆ ಈ ಅಪ್ಲಿಕೇಷನ್ ಹೆಚ್ಚು ಉಪಯೋಗಕ್ಕೆ ಬರುತ್ತದೆ. 15 ದಿನಗಳ ಕಾಲ ನಡೆಯಲಿರುವ ಈ ಪಂದ್ಯಾವಳಿಗಳ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ಸಿಗುತ್ತದೆ. ಪ್ರತಿ ಪಂದ್ಯದ ಸ್ಕೋರ್ ವಿವರ ನೇರಪ್ರಸಾರವಾಗುತ್ತದೆ. ಪಂದ್ಯಗಳ ಪಟ್ಟಿ, ಸುದ್ದಿಗಳು ಅಪ್‍ಡೇಟ್ ಆಗುತ್ತವೆ. ಜೊತೆಗೆ ಆಟಗಾರರ ಪರಿಚಯ, ವಿಡಿಯೋಗಳನ್ನು ಈ ಅಪ್ಲಿಕೇಷನ್ ಒದಗಿಸುತ್ತದೆ. ಟೆನ್ನಿಸ್‍ಪ್ರಿಯರಿಗಾಗಿ ಆಲ್ ಇಂಗ್ಲೆಂಡ್ ಲಾನ್ ಟೆನ್ನಿಸ್ ಕ್ಲಬ್ ಸಿದಟಛಿಪಡಿಸಿರುವ ಈ ಅಪ್ಲಿಕೇಷನ್ ಅನ್ನು ಉಚಿತವಾಗಿ ಡೌನ್‍ಲೋಡ್ ಮಾಡಿಕೊಳ್ಳಬಹುದು. http://bit.ly/LPDfXJ
Read More

ಬಿಳಿ ದಾಸವಾಳ ಹೂ ಪ್ರಯೋಜನ

ಬಿಳಿ ದಾಸವಾಳ ಹೂ ಪ್ರಯೋಜನ
ಪ್ರತಿದಿನ ಬೆಳಗ್ಗೆ ಹಸಿದ ಹೊಟ್ಟೆಯಲ್ಲಿ
ಶುದಟಛಿ ನೀರಿನಲ್ಲಿ ತೊಳೆದ 4-5 ಬಿಳಿ
ದಾಸವಾಳ ಹೂಗಳನ್ನು ತಿಂದರೆ
ಹೊಟ್ಟೆನೋವು ಬರುವುದಿಲ್ಲ.
Read More

ಥ್ರಿಲ್ಲಿಂಗ್ ಆಟ ಮಿಸ್ ಮಾಡಿಕೊಳ್ಳಬೇಡಿ!

ಥ್ರಿಲ್ಲಿಂಗ್ ಆಟ ಮಿಸ್ ಮಾಡಿಕೊಳ್ಳಬೇಡಿ!
ಆಂಡ್ರೆ ಎಂಬ ಹೆಂಗಸು ಕಳೆದು ಹೋದ ತನ್ನ ಗಂಡನನ್ನು ಹುಡುಕುವುದೇ ಈ ಗೇಮ್. ಹೆಸರು,
`ಲೆಟರ್ಸ್ ಫ್ರಮ್ ನೋವೇರ್'. ಸತ್ತು ಬಿದ್ದ ಪೋಸ್ಟ್ ಮ್ಯಾನ್ ಬಳಿ ಇದ್ದ ಲೆಟರ್‍ಗಳನ್ನು ಸಂಗ್ರಹಿಸಿ
ಅದರ ಮೂಲಕ ಗಂಡನ ಪತ್ತೆಗೆ ಹೊರಡುತ್ತಾಳೆ ಅಂಡ್ರೆ. ಹುಡುಕಾಟದ ವೇಳೆ ಎದುರಾಗುವ
ಸವಾಲುಗಳನ್ನು ಪರಿಹರಿಸುತ್ತಾ ಮುಂದೆ ಸಾಗುತ್ತಾ ಹೋಗುತ್ತಾಳೆ. ಭಯ ಹುಟ್ಟಿಸುವ,
ರೋಮಾಂಚಕಾರಿಯಾದ, ನಿಗೂಢವಾದ ಅನುಭವ ನೀಡುವ ಈ ಗೇಮ್ ಇದು. 11 ವಿಶಿಷ್ಟವಾದ
ಸಾಹಸ ಪ್ರಧಾನವಾದ ಸೆಟ್ಟಿಂಗ್‍ಗಳು, 50 ಆಕರ್ಷಕ ಸೆಟ್ಟಿಂಗ್‍ಗಳು ಗೇಮ್‍ನ ಉದ್ದಕ್ಕೂ ಇವೆ.
ಈ ಗೇಮ್‍ನಲ್ಲಿ 11 ಮಿನಿ ಗೇಮ್‍ಗಳೂ ಇವೆ. ಒಂದೊಂದು ಪತ್ರವೂ ಒಂದೊಂದು ಸುಳಿವು
ನೀಡುತ್ತಾ ಆಂಡ್ರೆಯನ್ನು ಗಂಡನ ಹತ್ತಿರ ಕರೆದೊಯ್ಯುತ್ತವೆ. ಆದರೆ ಆ ಸುಳಿವನ್ನು ಬಿಡಿಸಿ ದಾರಿ
ಕಂಡುಕೊಳ್ಳುವುದೇ ಗೇಮ್‍ನಲ್ಲಿರುವ ಮಜ. ಗೇಮ್ ಬಗ್ಗೆ ಕುತೂಹಲವಿದೆಯಾ? ಇಲ್ಲಿಂದ ಡೌನ್‍ಲೋಡ್ ಮಾಡಿಕೊಳ್ಳಿ. http://bit.ly/NbKgaj


Read More

ಹೊಟ್ಟೆ ಉಬ್ಬರದ ಸಮಸ್ಯೆಗೆ ಪರಿಹಾರ

ಹೊಟ್ಟೆ ಉಬ್ಬರದ ಸಮಸ್ಯೆಗೆ ಪರಿಹಾರ

ಇಂದಿನ ದಿನದಲ್ಲಿ ಹೊಟ್ಟೆ ಉಬ್ಬರದ ಸಮಸ್ಯೆ ಸಾಮಾನ್ಯ. ಇಂತಹ ಸಮಸ್ಯೆಯಿಂದ ಬಳಲುವವರು ಪ್ರತಿದಿನ ಅಲ್ಪ ಪ್ರಮಾಣದಲ್ಲಿ ನೆಲ್ಲಿಕಾಯಿ ಸೇವಿಸುವುದರಿಂದ ಹೊಟ್ಟೆ ಉಬ್ಬರದ ಸಮಸ್ಯೆ ನಿವಾರಣೆಯಾಗುತ್ತದೆ.
Read More

ಮೃಗಾಲಯದ ಚಿರತೆ ಸೆರೆ

ಮೃಗಾಲಯದ ಚಿರತೆ ಸೆರೆ
ಚಿತ್ರದುರ್ಗ: ನಗರದ ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ ಬೋನು ಸ್ವಚ್ಛಗೊಳಿಸುವಾಗ ತಪ್ಪಿಸಿಕೊಂಡಿದ್ದ ಚಿರತೆಯನ್ನು 3 ತಾಸುಗಳ ಕಾರ್ಯಾಚರಣೆ ನಡೆಸಿ ಅರಣ್ಯ ಇಲಾಖೆ ಸಿಬ್ಬಂದಿ ಸೆರೆಯಿಡಿದಿದ್ದಾರೆ.
ಬೋನು ಸ್ವಚ್ಛಗೊಳಿಸಲು ಮೃಗಾಲಯದ ಸಿಬ್ಬಂದಿ ರಾಮಾಂಜನೇಯ ಭಾನುವಾರ ಬೆಳಗ್ಗೆ 7.30ರಲ್ಲಿ 4 ವರ್ಷದ ಚಿರತೆ ‘ಭೀಮ’ನನ್ನು ಬೇರೊಂದು ಬೋನಿಗೆ ಸ್ಥಳಾಂತರಿಸಲಾಗಿತ್ತು. ಆದರೆ, ಆ ಬೋನಿನ ಬಾಗಿಲನ್ನು ಸರಿಯಾಗಿ ಹಾಕಿರಲಿಲ್ಲ.
ಬೆಳಗ್ಗೆ ಮೃಗಾಲಯಕ್ಕೆ ಬಂದಿದ್ದ ಪ್ರವಾಸಿಗಳು, ಚಿರತೆ ಕಂಡು ದಿಕ್ಕಾಪಾಲಾಗಿ ಓಡಿದರು. ಚಿರತೆಯೂ ಕಂಗಾಲಾಗಿ ಮೃಗಾಲಯದ ಬಳಿಯೇ ಇದ್ದ ಚರಂಡಿಯಲ್ಲಿ ಬಿದ್ದು ಬಳಿಕ ಪೊದೆಗೆ ನುಗ್ಗಿ ಅವಿತು ಕುಳಿತಿತ್ತು.
ತಕ್ಷಣವೇ ಮೃಗಾಲಯದ ಸಿಬ್ಬಂದಿ ನಗರಕ್ಕೆ ಧಾವಿಸಿ ಹಂದಿ ಹಿಡಿಯುವವರನ್ನು ಕರೆದೊಯ್ದು ಚಿರತೆ ಸೆರೆಗೆ ಬಲೆ ಬೀಸಿದ್ದಾರೆ. 3 ತಾಸಿನ ಬಳಿಕ ಪೊದೆಯಿಂದ ಹೊರಬಂದಾಗ ಅದನ್ನು ಸೆರೆಹಿಡಿದಿದ್ದಾರೆ.
ಇದರಿಂದ ಪ್ರವಾಸಿಗರು ನಿಟ್ಟುಸಿರು ಬಿಟ್ಟಿದ್ದಾರೆ.
Read More

ಹಣ್ಣುಗಳ ಸೇವನೆಯಿಂದ....

ಹಣ್ಣುಗಳ ಸೇವನೆಯಿಂದ....
ದಾಳಿಂಬೆ ಜ್ಯೂಸ್ ನ ನಿಯಮಿತ ಸೇವನೆಯಿಂದ ಶರೀರದ ಉಷ್ಣತೆಯನ್ನು ಕಡಿಮೆಗೊಳಿಸಿ ದೇಹವನ್ನು ತಂಪಾಗಿಸಿಕೊಳ್ಳಬಹುದು.

ಆಹಾರದಲ್ಲಿ ನಿಯಮಿತ ಟ್ಯೊಮ್ಯಾಟೋ ಬಳಕೆಯಿಂದ ಅಜೀರ್ಣದ ತೊಂದರೆಯನ್ನು ಹತೋಟಿಗೆ ತರಬಹುದು.

ಪ್ರತಿದಿನ ಊಟದ ನಂತರ ಹಾಗೂ ಮೊದಲು ನೀರಿನಲ್ಲಿ ನಿಂಬೆರಸ ಬೆರೆಸಿ ಕುಡಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.
Read More